ಗೆಜ್ಜೆ ಕಟ್ಟಿ ಹೆಜ್ಜೆ ಹಾಕಲಿದ್ದಾರೆ 240 ವಿದ್ಯಾರ್ಥಿಗಳು!
ಲೇಖಕರು : ವಿಲಾಸ್ ಕುಮಾರ್ ನಿಟ್ಟೆ, ಕಾರ್ಕಳ
ಸೋಮವಾರ, ಫೆಬ್ರವರಿ 2 , 2015
|
ಫೆಬ್ರವರಿ 2, 2015
|
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಲಿದ್ದಾರೆ 240 ವಿದ್ಯಾರ್ಥಿಗಳು!
ಕಾರ್ಕಳ :
ಈ ಬಾರಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಲಿದ್ದಾರೆ 240 ವಿದ್ಯಾರ್ಥಿಗಳು!
ಕರಾವಳಿಯ ಗಂಡುಕಲೆ ಎಂದೆನಿಸಿದ ಯಕ್ಷಗಾನ ಕಲೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಉದ್ದೇಶವನ್ನಿಟ್ಟುಕೊಂಡು ಕಾರ್ಕಳದಲ್ಲಿ ಸಮಾನ ಮನಸ್ಕರಿಂದ ಹುಟ್ಟಿಕೊಂಡ ಸಂಸ್ಥೆ 'ಯಕ್ಷ ಕಲಾರಂಗ' ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಇದೀಗ ವಿದ್ಯಾರ್ಥಿಗಳಿಂದಲೇ ಯಕ್ಷಗಾನ ಮಾಡಿಸಲು ಹೊರಟಿದೆ.
ಕಾರ್ಕಳ ತಾಲೂಕಿನ ಪ್ರಾಥಮಿಕ, ಪ್ರೌಢ ಮತ್ತು ಪ್ರಥಮದರ್ಜೆ ಕಾಲೇಜು ಸೇರಿದಂತೆ ಒಟ್ಟು 12 ಶಾಲೆ- ಕಾಲೇಜುಗಳನ್ನು ಆಯ್ಕೆ ಮಾಡಿದ್ದು, 240 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಸಂಸ್ಥೆಯ ವತಿಯಿಂದ ಕಾರ್ಕಳ ತಾಲೂಕಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತವಾಗಿ ಬೇರೆ ಬೇರೆ ಯಕ್ಷಗಾನ ಗುರುಗಳಿಂದ ತರಬೇತಿ ನೀಡಲಾಗುತ್ತಿದೆ. ಕಲಿಕೆಯಲ್ಲಿ ಆಸಕ್ತಿಯಿರುವ ಸುಮಾರು 240 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ, ಯಕ್ಷಗಾನದಲ್ಲಿ ಪೂರ್ಣ ಪ್ರಮಾಣದ ಕಲಾವಿದರನ್ನು ಸಷ್ಟಿಸುವ ನೆಲೆಯಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ ವಾರ್ಷಿಕ 2 ಲಕ್ಷ ರೂ. ವಿನಿಯೋಗಿಸಲಾಗುತ್ತಿದೆ.
ಧರ್ಮರಾಜ ಕಂಬಳಿ, ಅಜಿತ್ ಕುಮಾರ್ ಜೈನ್, ಸತೀಶ್ ಮಡಿವಾಳ, ಆನಂದ ಗುಡಿಗಾರ್, ಗಣೇಶ್ ಶೆಟ್ಟಿ ಮತ್ತು ಮಹಾವೀರ ಪಾಂಡಿ ಯಕ್ಷಗುರುಗಳಾಗಿ ಸಹಕರಿಸುತ್ತಿದ್ದಾರೆ. ಯಕ್ಷ ಕಲಾರಂಗ ಕಾರ್ಕಳದ ಅಧ್ಯಕ್ಷರಾಗಿ ಗೋಪಾಲಕಷ್ಣ ಶೆಟ್ಟಿ, ಗೌರವಾಧ್ಯಕ್ಷರಾಗಿ ಡಾ.ಸಿ.ಪಿ.ಅಕಾರಿ, ಸಂಚಾಲಕರಾಗಿ ಬಿ.ಪದ್ಮನಾಭ ಹಾಗೂ ಇನ್ನಿತರ ಪದಾಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಕಿಶೋರ ಯಕ್ಷೋತ್ಸವ : ಯಕ್ಷ ಕಲಾರಂಗ ಕಾರ್ಕಳ ಇವರಿಂದ ವಿಕಾಸ ಸೇವಾ ಸಂಸ್ಥೆಯ ಸಹಯೋಗದಲ್ಲಿ ಕಿಶೋರ ಯಕ್ಷೋತ್ಸವ-2015 ಕಾರ್ಕಳದ ಅನಂತಶಯನದ ಬಳಿಯಿರುವ ಕಸ್ತೂರಿ ರಂಗ ಮಂಟಪದಲ್ಲಿ ಫೆ.6, 7, 8ರಂದು ಆಯೋಜಿಸಲಾಗಿದೆ. ಈ ಮೂರು ದಿನಗಳಲ್ಲಿ ನಾನಾ ಶಾಲೆಗಳ ತಂಡಗಳಿಂದ 10 ಪ್ರಸಂಗಗಳ ಪ್ರದರ್ಶನವಿದೆ. ಫೆ. 8ರಂದು ಸಂಜೆ 5.45ರಿಂದ ಸಮಾರೋಪ ಸಮಾರಂಭ ನಡೆಯಲಿದೆ.
''ಯಕ್ಷಗಾನ ಕಲಾಭಿಮಾನಿಗಳ ಸಹಕಾರ ಹಾಗೂ ಯಕ್ಷ ಕಲಾರಂಗದ ಪದಾಕಾರಿಗಳು ಒಂದು ತಂಡವಾಗಿ ಕಾರ್ಯನಿರ್ವಹಿಸುವುದರಿಂದ ಈ ಯಶಸ್ಸು ಸಾಧ್ಯವಾಗಿದೆ. ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೂ ಉಳಿಸುವ ಪ್ರಯತ್ನ ನಮ್ಮದು. ವಿದ್ಯಾರ್ಥಿ ಜೀವನದಲ್ಲೇ ಆಸಕ್ತಿ ಬರುವಂತಹ ಕಾರ್ಯ ಆರಂಭಿಸಿದ್ದೇವೆ.`` - ಗೋಪಾಲಕಷ್ಣ ಶೆಟ್ಟಿ ಕುಕ್ಕುಂದೂರು , ಯಕ್ಷ ಕಲಾರಂಗದ ಅಧ್ಯಕ್ಷ
ಕೃಪೆ :
http://vijaykarnataka.com
|
|
|